Kerala Plus One Model Question Paper Kannada – Text
Read the full text of this sample paper below — useful to quickly search, copy and reference the content online without downloading the PDF.
📄 View text version (5 pages)
Page 2
HIGHER SECONDARY SAMPLE QUESTION PAPER
PLUS ONE
PART II KANNADA
Score: 80 Marks Time: 21/2 Hours
ವಿದ್ಯಾರ್ಥಿಗಳಿಗೆ ಸೂಚನೆಗಳು:
➢ ಮೊದಲ 15 ನಿಮಿಷ ಕೂಲ್ ಓಫ್ ಸಮಯವಾಗಿದೆ. ಪ್ರಶ್ನೆಗಳನ್ನು ಓದಿ
ಅರ್ಥೈಸಿಕೊಳ್ಳುವುದಕ್ಕೂ ಉತ್ತರಗಳ ಬಗ್ಗೆ ಯೋಚಿಸುವುದಕ್ಕೂ ಈ ಸಮಯವನ್ನು
ಬಳಸಿಕೊಳ್ಳಬಹುದು.
➢ ಪ್ರಶ್ನೆಗಳನ್ನು ಮತ್ತು ಸೂಚನೆಗಳನ್ನು ಸರಿಯಾಗಿ ಓದಿ ಅರ್ಥೈಸಿಕೊಂಡ ಮೇಲೆ ಉತ್ತರ
ಬರೆಯಿರಿ.
➢ ಉತ್ತರ ಬರೆಯುವಾಗ ಅಂಕ ಸಮಯ ಮೊದಲಾದವುಗಳನ್ನು ಪರಿಗಣಿಸಬೇಕು.
➢ ಕೊಟ್ಟಿರುವ ಸೂಚನೆಗಳನ್ನು ಗಮನವಿಟ್ಟು ಓದಿರಿ.
1 ರಿಂದ 4 ರವರೆಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆವರಣದಿಂದ ಆರಿಸಿ
ಬರೆಯಿರಿ. (4×1=4)
1. ಸುಗ್ಗಿ ಬರುತಿದೆ ಕವನವನ್ನು ಬರೆದ ಕವಿ ಯಾರು?
(ದ. ರಾ. ಬೇಂದ್ರೆ, ಕುವೆಂಪು, ಬಿ. ಎಂ. ಶ್ರೀ, ಡಿ. ವಿ. ಜಿ)
2. "ಮೂಢ ನಂಬಿಕೆಗಳ ಬೀಡಿನಲ್ಲಿ' ಪಾಠಭಾಗವು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿದೆ?
(ವಿಮರ್ಶೆ, ವೈಚಾರಿಕ ಲೇಖನ, ಹಾಸ್ಯ ಲೇಖನ, ಕಾದಂಬರಿ)
3. “ನೀನೇನು ನನ್ನ ಫಾತಿಹಾದ ನೈಚೋರಿಗೆ ಕಾದು ಕೂತಿದ್ದಿಯೇನೊ” - ಈ ಮಾತನ್ನು
ಹೇಳಿದವರು ಯಾರು?
(ಹಾಜಿಯಾರರು, ಜಮೀಲಾ, ಖಾದ್ರಿಕಾಕ, ಹಲೀಮಾಬಿ)
4. "ಕೂಡಲಸಂಗಮದೇವ' – ಇದು ಯಾರ ಅಂಕಿತನಾಮ?
(ಆಯ್ದಕ್ಕಿ ಲಕ್ಕಮ್ಮ, ಅಕ್ಕಮಹಾದೇವಿ, ಜೇಡರದಾಸಿಮಯ್ಯ, ಬಸವಣ್ಣ)
5 ರಿಂದ 10 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಸೂಚನೆಯಂತೆ
ಉತ್ತರಿಸಿರಿ. (4×1=4)
5. ನಿನ್ನನುಭವವೆ - ಈ ಪದವನ್ನು ವಿಂಗಡಿಸಿ ಬರೆಯಿರಿ.
6. ರಜ – ಈ ಪದದ ಅರ್ಥ ಬರೆಯಿರಿ.
7. ತಂದೀಯ, ಇದ್ಯ – ಈ ಪದದ ಶಿಷ್ಟರೂಪ ಬರೆಯಿರಿ.
8. ಕದನ – ಈ ಪದದ ಪರ್ಯಾಯ ಪದ ಬರೆಯಿರಿ.
9. ಸಮುದ್ರವನ್ನು ರಾಜಗೀಜ ಎಂದು ಬಣ್ಣಿಸಿದ ಕವಿಗಳು ಬಹುಶಃ ಮೀನು ಹಿಡಿದವರೂ ಅಲ್ಲ –
ಈ ವಾಕ್ಯದಲ್ಲಿ ಬಂದಿರುವ ಪ್ರತಿಧ್ವನಿ ಪದವನ್ನು ಗುರುತಿಸಿ ಬರೆಯಿರಿ.
Page 3
10. ಅಧ್ಯಾಪಕರು ವಿದ್ಯಾರ್ಥಿಗಳಿಗೆ ಉತ್ತಮ ಗುಣ ನಡತೆಯನ್ನು ಕಲಿಸಿಕೊಡುವಲ್ಲಿ ಸಫಲರಾದರು.
- ಅಡಿಗೆರೆ ಎಳೆದ ಪದದ ಭಾವನಾಮರೂಪವನ್ನು ಬರೆಯಿರಿ.
11 ರಿಂದ 17 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಐದು ಪ್ರಶ್ನೆಗಳಿಗೆ
ಉತ್ತರಿಸಿರಿ. (5×2=10)
11. ಭೂತಾರಾಧನೆಯ ವಿವಿಧ ಪ್ರಭೇದಗಳನ್ನು ಹೆಸರಿಸಿರಿ.
12. ಯುದ್ಧ ವಿರೋಧಿ ಸಂದೇಶವನ್ನು ಸಾರುವ ಎರಡು ಘೋಷಣಾ ವಾಕ್ಯ ಗಳನ್ನು ಬರೆಯಿರಿ.
13. ನೆರೆಯಲ್ಲಿ ಸಿಲುಕಿದ ಜನರ ಜೀವನಸ್ಥಿತಿಯು ಕಣ್ಣೀರಲ್ಲಿ ಕೈ ತೊಳೆಯುವಂತಾಯಿತು. ಅಡಿಗೆರೆ
ಎಳೆದ ಪದವನ್ನು ಬಳಸಿಕೊಂಡು ಬೇರೊಂದು ವಾಕ್ಯವನ್ನು ರಚಿಸಿರಿ.
14. ಕೆಳಗೆ ನೀಡಲಾದ ಎರಡು ಸರಳ ವಾಕ್ಯ ಗಳನ್ನು ಮಿಶ್ರವಾಕ್ಯವನ್ನಾಗಿ ಪರಿವರ್ತಿಸಿ ಬರೆಯಿರಿ.
ರೆಡ್ ಸ್ಕಿನ್ ನಲ್ಲಿ ನೂರಾರು ಬಗೆಯ ಮೀನುಗಳು ಇದ್ದವು. ಹವಳ ಜಾತಿಗೆ ಸೇರಿದ
ಸೀಅನಿಮೋನ್ ಪೊದರಿನೊಳಗೆ ವಾಸಿಸುವ ಕೆಂಪು ಏಂಜೆಲ್ ಮೀನುಗಳು ಯಥೇಚ್ಚ ಇದ್ದವು.
15. ಕೆಳಗೆ ನೀಡಲಾದ ವಾಕ್ಯಕ್ಕೆ ಸೂಕ್ತ ಲೇಖನ ಚಿಹ್ನೆಗಳನ್ನು ಅಳವಡಿಸಿರಿ.
ಸ್ವಾಮಿ ಕುಂಬಳಕಾಯಿ ಯಾರಾದರೂ ರೊಕ್ಕಕ್ಕೆ ಕೊಡೋದುಂಟಾ ಪುಕ್ಕಟೆ ಆದ್ರೆ ಕೊಡ್ತೀವಿ
ಎಂಬ ಉತ್ತರ ಬಂತಂತೆ
16. "ತಸ್ಕರಸ್ಯಾನೃತಂ ಬಲಂ' - ಈ ವಾಕ್ಯದ ಆಶಯ ಬರೆಯಿರಿ.
17. ಶೇಣಿಯವರು ನಿರ್ವಹಿಸಿದ ಪ್ರತಿನಾಯಕ ಪಾತ್ರಗಳನ್ನು ಹೆಸರಿಸಿರಿ.
18 ರಿಂದ 22 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ
ಉತ್ತರಿಸಿರಿ.
(4×4=16)
18. ಹೊಂದಿಸಿ ಬರೆಯಿರಿ.
ಅ ಆ
ಸುಗ್ಗಿ ಬರುತಿದೆ ಪಾಪದ ಕೊಡ ತುಂಬಿದ ಜಗತ್ಪ್ರಳಯ
ಮಂಕುತಿಮ್ಮನ ಕಗ್ಗ ತೊರೆದಗಂಡನೆದುರುಗೊಂಡ ಕೋಮಲೆಯನು
ಹೋಲುತ
ಸುನಾಮಿ ಹಾಡು ಕೊಡದೆ ತ್ಯಾಗಿ ಎನಿಸಿಕೊಂಬುದು ಮುಡಿ ಇಲ್ಲದ
ಶೃಂಗಾರ
ವಚನಗಳು ಹೊಸ ಚಿಗುರು ಹಳೆಬೇರು ಕೂಡಿರಲು ಮರ
ಸೊಬಗು
Page 4
19. ಕೊಳವೆ ಬಾವಿಯ ಅತಿಯಾದ ನಿರ್ಮಾಣದಿಂದ ಭೂಮಿಯ ಅಂತರ್ಜಲದ ಮಟ್ಟ
ಕಡಿಮೆಯಾಗುತ್ತಿದೆ. ಇದನ್ನು ತಡೆಗಟ್ಟುವಂತೆ ವಿನಂತಿಸಿ ಜಿಲ್ಲಾಧಿಕಾರಿಗೆ ಸಮರ್ಪಿಸಲು
ಮನವಿ ಪತ್ರವೊಂದನ್ನು ಬರೆಯಿರಿ.
20. ಕೆಳಗಿನ ಪದ್ಯದ ಆಶಯ ಬರೆಯಿರಿ.
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ
21. "ಇನಿತನ್ಯಾಯಮನಾನೆ ಮಾಡಿದೆ' - ಈ ಮಾತನ್ನು ಸಂದರ್ಭ ಸಹಿತ ವಿವರಿಸಿರಿ.
22. ಕೆಳಗೆ ಕೊಟ್ಟಿರುವ ಗದ್ಯದ ತುಣುಕನ್ನು ಕನ್ನಡಕ್ಕೆ ಭಾಷಾಂತರಿಸಿರಿ.
Mysore Palace is also known as Amba Vilas Palace. It is located in Mysore,
Karnataka. The Palace is in the centre of Mysore, and faces the Chamundi Hills
eastward.
23 ರಿಂದ 28 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಐದು ಪ್ರಶ್ನೆಗಳಿಗೆ ಒಂದು ಪುಟಕ್ಕೆ
ಕಡಿಮೆಯಾಗದಂತೆ ಉತ್ತರಿಸಿರಿ. (5×6=30)
23. ತವರು ಮತ್ತು ಕೃಷಿಗೆ ಸಂಬಂಧಿಸಿದಂತೆ ಜನಪದರ ಅನಿಸಿಕೆಯನ್ನು ಬರೆಯಿರಿ.
24. ಏಕಚಕ್ರ ನಗರದ ರಾಜ ಮತ್ತು ಬಕರೊಳಗೆ ನಡೆದ ಒಪ್ಪಂದಗಳು ಯಾವುದೆಲ್ಲ? ಬರೆಯಿರಿ.
25. ಖಾದ್ರಿಕಾಕನ ಪಾತ್ರಚಿತ್ರಣ ಮಾಡಿರಿ.
26. ಭೂತ ಮತ್ತು ತೆಯ್ಯಂ ಆರಾಧನೆಗಳಲ್ಲಿ ಕಂಡ ಸಾಮ್ಯ ವ್ಯತ್ಯಾ ಸಗಳನ್ನು ಬರೆಯಿರಿ.
27. "ಬೆಳಗು' ಕವನದಲ್ಲಿ ಕವಿ ದ. ರಾ. ಬೇಂದ್ರೆಯವರು ಸೂರ್ಯೋದಯದ ಸಂದರ್ಭದಲ್ಲಿ
ಪ್ರಕೃತಿಯ ವರ್ಣನೆಯನ್ನು ಯಾವ ರೀತಿಯಲ್ಲಿ ಮಾಡಿರುವರು? ವಿವರಿಸಿರಿ.
28. ಅಭಯರುಚಿ ಮತ್ತು ಅಭಯಮತಿ ಪರಸ್ಪರ ಸಂತೈಸಿಕೊಳ್ಳುವ ಸಂದರ್ಭವನ್ನು ಸಂಗ್ರಹವಾಗಿ
ಬರೆಯಿರಿ.
29 ರಿಂದ 31 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಎರಡು ಪ್ರಶ್ನೆಗಳಿಗೆ ಒಂದೂವರೆ ಪುಟಕ್ಕೆ
ಕಡಿಮೆಯಾಗದಂತೆ ಉತ್ತರಿಸಿರಿ. (2×8=16)
29. ಬಡತನ ಮತ್ತು ಬಾಲಕಾರ್ಮಿತನದ ಘೋರ ಚಿತ್ರಣ "ಹುಗ್ಗಿ' ಕಥೆಯಲ್ಲಿ ಮೂಡಿ ಬಂದ
ಬಗೆಯನ್ನು ವಿವರಿಸಿರಿ.
30. ತನ್ನ ಜನ್ಮ ವೃತ್ತಾಂತವನ್ನು ತಿಳಿದ ಕರ್ಣನ ಮಾನಸಿಕ ಸಂಘರ್ಷ ಮತ್ತು ಆತ ಕೈಗೊಂಡ
ನಿರ್ಧಾರವು "ನಿನ್ನಯ ವೀರರೈವರ ನೋಯಿಸೆನು' ಕಾವ್ಯಭಾಗದಲ್ಲಿ ವರ್ಣಿತವಾದ ಬಗೆಯನ್ನು
ನಿಮ್ಮ ಮಾತುಗಳಲ್ಲಿ ಬರೆಯಿರಿ.
31. "ಸುಗ್ಗಿ ಬರುತಿದೆ' ಪದ್ಯದ ಆಶಯವನ್ನು ಬರೆಯಿರಿ.
**********
Page 5
Question Paper Prepared by:
1. Sreenivasa Ballullaya : GHSS Adoor (14053)
2. Satheesh Kumar. A : GHSS Paivalike Nagar (14014)
3. Nalini. A. P : GVHSS For Girls Kasaragod (14041)
4. Kadhijath Nisa. P : GFHSS Bekal (14068)
5. Sharmila. A : GHSS Angadimogar (14051)
6. Sujith Kumar : SDPAHSS Dharmmathadka (14111)
7. Sandhya. A : GHSS Bandadka (14064)
8. Sandhya. P. S : GHSS Pandi (14101)
9. Vijaya. K : GHSS Bellur (14046)